ನವದೆಹಲಿ: ಬಾಲಿವುಡ್ ನ ಜನಪ್ರಿಯ ನಟಿ ಸೋನಾಲಿ ಬೇಂದ್ರೆ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿದ್ದು, ಇದು ನಿಜವೆಂದು ದೃಢಪಡಿಸಲಾಗಿದೆ.
ಸೋನಾಲಿ ಬೇಂದ್ರೆ ಅವರಿಗೆ ಉನ್ನತ ವರ್ಗದ ಕ್ಯಾನ್ಸರ್ ಪತ್ತೆಯಾಗಿದೆ ಮತ್ತು ಇದು ಪಸರಿಸುತ್ತಿದೆ ಎಂದು ಸೋನಾಲಿ ಬೇಂದ್ರೆ ಅವರ ನಾದಿನಿ ತಿಳಿಸಿದ್ದಾರೆ.
ಇದು ಹಠಾತ್ ಆಗಿ ನಡೆದಿದೆ. ಕೆಲವೊಂದು ವಿಷಯಗಳು ಹಠಾತ್ ಆಗಿ ನಡೆಯುತ್ತದೆ. ಸೋನಾಲಿ ಹೋರಾಟಗಾರ್ತಿ. ಆಕೆ ಖಂಡಿತವಾಗಿಯೂ ಇದರಿಂದ ಮೇಲೆದ್ದು ಬರಲಿರುವಳು. ಆಕೆಯಲ್ಲಿ ಧನಾತ್ಮಕ ಶಕ್ತಿಯಿದೆ. ನಾವೆಲ್ಲರೂ ಆಕೆ ಗುಣಮುಖವಾಗಲೆಂದು ಹಾರೈಸುವ ಎಂದು ಸೋನಾಲಿ ಅವರ ನಾದಿನಿ ಸೃಷ್ಟಿ ಆರ್ಯ ತಿಳಿಸಿದ್ದಾರೆ.
ಹಲವಾರು ಬಾಲಿವುಡ್ ನಟನಟಿಯರು ಸೋನಾಲಿಗೆ ಧೈರ್ಯ ತುಂಬಿದ್ದಾರೆ. ನಟ ಅಕ್ಷಯ್ ಕುಮಾರ್ ಅವರು ಸೋನಾಲಿ ಬೇಂದ್ರೆ ಅವರನ್ನು ಮುಖತಃ ಭೇಟಿಯಾಗಿ ಧೈರ್ಯ ತುಂಬಿದ್ದಾರೆ ಎಂದು ವರದಿಗಳು ಹೇಳಿವೆ.
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ.
ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…
ಜಿಪ್ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್ನಲ್ಲಿ ನಡೆದಿದೆ.
ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…