ಮೈಸೂರು: ಪಾತಿ ಫಿಲಂಸ್ ರವರ ತೃತೀಯ ಚಿತ್ರ ‘ನನ್ನ ಹೆಸರು ಕಿಶೋರ ಏಳು ಪಾಸು 8’ ಚಿತ್ರದ ಮುಹೂರ್ತಕ್ಕೆ ನಗರದ ತ್ಯಾಗರಾಜ ರಸ್ತೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಮೈಸೂರು ಮತ್ತು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರು ಡಿ.ಟಿ.ಪ್ರಕಾಶ್ ಅವರು ಚಿತ್ರಕ್ಕೆ ಚಾಲನೆ ನೀಡಿದರು.
ತಾತ ಮತ್ತು ಮೊಮ್ಮಗನ ಬಾಂಧವ್ಯ ಬೆಸೆಯುವ ಚಿತ್ರ ಇದಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-ಕಾಸರಗೋಡು ಎಂಬ ಸೂಪರ್ ಹಿಟ್ ಚಿತ್ರದ ನಂತರ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಹೇಂದ್ರ ನಟಿಸಿರುವ ಚಿತ್ರ ಇದಾಗಲಿದೆ. ತಾತನ ಪಾತ್ರದಲ್ಲಿ ದತ್ತಣ್ಣ ನಟಿಸುತ್ತಿದ್ದು, ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಭಾರತಿ ಶಂಕರ್ ವಹಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ ಸುದೀಪ ಶರ್ಮ, ಸಾಹಿತ್ಯ ಮತ್ತು ಸಂಗೀತ ಮಂಜು ಕವಿ ವಾದ್ಯ ಸಂಯೋಜನೆ ಛಾಯಾಗ್ರಹಣ ಲವಿತ್ ಸಂಕಲನ ಕೆಂಪರಾಜು ಬಿ ಎಸ್ ಪಿಆರ್ ಓ ಹರೀಶ್ ಸ್ಥಿರ ಚಿತ್ರಣ ಓಂ ಪ್ರಕಾಶ್ ಮತ್ತು ನಿರ್ಮಾಣ ನಿರ್ವಹಣೆ ವೇಣುಗೋಪಾಲ್, ಸಂಭಾಷಣೆ ಲೋಕೇಶ್ ಗೌಡ ಮಂಡ್ಯ ಇವರುಗಳ ನಿರ್ವಹಣೆ ಚಿತ್ರಕ್ಕಿದೆ.
ಮುಖ್ಯ ಭೂಮಿಕೆಯಲ್ಲಿ ತಬಲಾ ನಾಣಿ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪ್ರವರ್ತ ರಾಜು, ಮಂಡ್ಯ ಆನಂದ್ ಮುಂತಾದವರು ನಟಿಸಲಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಕೇಳಲು ಬಹಳ ಇಂಪಾಗಿದೆ. ಮೈಸೂರಿನ ಸುತ್ತಮುತ್ತ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದು, ದಸರಾ ವೇಳೆ ಚಿತ್ರವನ್ನು ತೆರೆಯ ಮೇಲೆ ತರಲು ಬಹಳ ಉತ್ಸುಕರಾಗಿದ್ದೇವೆ ಎಂದು ಚಿತ್ರದ ನಿರ್ಮಾಪಕ ಎಂಡಿ.ಪಾರ್ಥಸಾರತಿ(ಪಾತಿ) ಯವರು ತಿಳಿಸಿದರು. ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ತೇಜಸ್ ಶಂಕರ್ ,ಹಾಗೂ ನೂರಾರು ಕಲಾವಿದರು ಹಾಜರಿದ್ದರು.
ಪಂಜಾಬಿ ಬ್ಯೂಟಿ ಪಾಯಲ್ ರಜಪೂತ್ ಅವರು ನಿರ್ಮಾಪಕರ ವಿರುದ್ಧ ಹೆಡ್ಬುಷ್ ನಟಿ ಬೆದರಿಕೆ ಹಾಕುತ್ತಿದ್ದಾರೆಂದು ಹೆಡ್ಬುಷ್ ನಟಿ ಆರೋಪಿಸುತ್ತಿದ್ದಾರೆ. RX…
ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ…
ಸ್ಯಾಂಡಲ್ವುಡ್ ನಟ ಗಣೇಶ್ ಅಭಿನಯದ ಉಲ್ಲಾಸ ಉತ್ಸಾಹ ನಟಿ ಯಾಮಿ ಗೌತಮ್ ಅವರು ಮೇ 10 ರಂದು ಗಂಡು ಮಗುವಿಗೆ…
ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿದ್ದಾರೆ. ಹೀಗಾಗಿ ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ…
ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಮಂಗಳೂರಿನ ಮೀನುಗಾರರಿಗೆ…
ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾಧನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಬಬ್ಬು…