ಸ್ಯಾಂಡಲ್ ವುಡ್ ನಲ್ಲೀಗ ಕ್ರಿಯಾಶೀಲತೆಯ ಸುಗ್ಗಿ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಬಹುತೇಕ ಸಿನೆಮಾಗಳ ಟ್ರೇಲರ್ ಗಳು ನಿರೀಕ್ಷೆಯ ಬೆಟ್ಟವನ್ನೇ ಸೃಷ್ಟಿಮಾಡಿವೆ. ಲಾಂಗು, ಮಚ್ಚು, ತಲೆಬುಡವಿಲ್ಲದ ಕಥೆಗಳಿಂದ ವ್ಯಥೆಗೊಳಗಾಗಿದ್ದ ಕನ್ನಡ ಪ್ರೇಕ್ಷಕ ಹೊಸಬರ ಕ್ರೀಯಾಶೀಲ ಯೋಚನೆಗಳಿಂದ ಮತ್ತೆ ಥಿಯೇಟರಿನ ದಾರಿ ಹಿಡಿದಿದ್ದಾನೆ. ಈ ವಾರವೂ ಅಂತಹ ಬೃಹತ್ ನಿರೀಕ್ಷೆಯ “ಗೋಧಿ ಬಣ್ಣ, ಸಾಧಾರಣ ಮೈಕಟ್ಟು” ಬಿಡುಗಡೆಯಾಗುತ್ತಿದೆ. ತಂದೆ-ಮಗನ ಭಾಂದವ್ಯವಿರುವ ಫ್ಯಾಮಿಲಿ ಸಿನೆಮಾ ಗೋಧಿ ಬಣ್ಣದಲ್ಲಿ ಅನಂತ್ ನಾಗ್ ಅವರು ಅಲ್ಝೀಮರ್ಸ್ ಪೀಡಿತ ತಂದೆಯಾಗಿ ಅಭಿನಯಿಸಿದರೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಾಣೆಯಾದ ತಂದೆಯನ್ನು ಹುಡುಕಾಡುವ ಮಗನ ಪಾತ್ರದಲ್ಲಿ ಮತ್ತು ನಾಯಕಿ ಶ್ರುತಿ ಹರಿಹರನ್ ಕಾಣೆಯಾದ ರೋಗಿಯನ್ನು ಹುಡುಕುವ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಡುಗಡೆಯ ಮುಂಚೆ ಹವಾ ಕ್ರಿಯೇಟ್ ಮಾಡಿರುವ ಚಿತ್ರ ಪ್ರೇಕ್ಷಕನ ನಿರೀಕ್ಷೆಯ ಮಟ್ಟವನ್ನು ತಲುಪಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವುದರೊಂದಿಗೆ ಹೊಸ ನಿರ್ಮಾಪಕರನ್ನು ಉಳಿಸಲು, ಹೊಸ ತಂತ್ರಜ್ಞರನ್ನು ಬೆಳೆಸಲಿ ಎಂಬುದು ನ್ಯೂಸ್ ಕನ್ನಡದ ಆಶಯ.
ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ಅರಣ್ಯಗಳಲ್ಲಿ ಕಾಡ್ಗಿಚ್ಚಿನ ಭಯವೂ ಶುರುವಾಗಿದ್ದು, ಇದೀಗ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ…
ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಮಳೆ ಗಾಳಿಗೆ ಬಾಳೆ ಸೇರಿದಂತೆ ಗಿಡ ಮರಗಳು ನೆಲಕ್ಕುರುಳಿವೆ. ಸುಮಾರು ಒಂದು ಗಂಟೆಗಳ ಕಾಲ…
ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಜೂ. 03 ರಂದು ಮತದಾನ ನಡೆಯಲಿದ್ದು, ಅರ್ಹ ಪದವೀಧರರು ಮತದಾರರ…
ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಹುಬ್ಬಳ್ಳಿಯ ನವನಗರ…
ಬಿರು ಬಿಸಿಲಿನಿಂದ ಬಸವಳಿದಿದ್ದ ಸಾಂಸ್ಕೃತಿಕ ನಗರಿ ಜನರಿಗೆ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ನಗರಕ್ಕೆ ತಂಪೆರೆಯಿತಾದರೂ…
ಟ್ಯೂಷನ್ ಗೆ ಬಿಡುವ ನೆಪದಲ್ಲಿ ಸ್ವಂತ ತಂಗಿಯ ಅಪ್ರಾಪ್ತ ಮಗಳನ್ನ ಕರೆದೊಯ್ದ ಕಾಮುಕ ಸೋದರಮಾವ ಅತ್ಯಾಚಾರವೆಸಗಿ ಪರಾರಿಯಾದ ಘಟನೆ ನಂಜನಗೂಡಿನಲ್ಲಿ…