ಸ್ಯಾಂಡಲ್ ವುಡ್ ನಲ್ಲಿ ಬಾಲಿವುಡ್ ಗಾಯಕರು ಹಾಡುವುದು ಹೊಸತೇನಲ್ಲ. ಅದರಲ್ಲೂ ಇತ್ತೀಚೆಗೆಯಂತು ಹಲವು ಗಾಯಕರು ಹಾಡಿ ಗಮನಸೆಳೆದಿದ್ದಾರಲ್ಲದೆ, ಅವು ಜನಪ್ರಿಯವೂ ಆಗಿದೆ.
ಈ ನಡುವೆ ಕನ್ನಡ ಚಿತ್ರಕ್ಕೆ ಆಶಾ ಬೋಂಸ್ಲೆ ಅವರು ಹಾಡುತ್ತಿರುವುದು ವಿಶೇಷವಾಗಿದೆ. `19/11′ ಚಿತ್ರದ “ಕಣ್ಣು ಕಣ್ಣಲಿ ಬಣ್ಣ ಬಣ್ಣದ ಕನಸನ್ನು ಕೊಡ್ತಾಳಲ್ಲ” ಎಂಬ ಹಾಡನ್ನು ಹಾಡುವ ಮೂಲಕ ಗಮನಸೆಳೆದಿದ್ದಾರೆ. ಈ ಚಿತ್ರವನ್ನು ಮಾಧವ ರೆಡ್ಡಿ ನಿರ್ಮಿಸುತ್ತಿದ್ದಾರೆ. ಇವರು 2016ನೇ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ರಾಜ್ಯಪ್ರಶಸ್ತಿ ಪಡೆದಿದ್ದ ಅಮರಾವತಿ ಚಿತ್ರವನ್ನು ನಿರ್ಮಿಸಿದ್ದರು. ಈಗ ಶ್ರೀ ನಿಲಯಂ ಸಿನೆ ಕ್ರಿಯೇಷನ್ಸ್ ಲಾಂಛನದಲ್ಲಿ ಮತ್ತೊಂದು ಚಿತ್ರ `19/11′ ನ್ನು ನಿರ್ಮಿಸುತ್ತಿದ್ದಾರೆ.
ಇನ್ನು ಆಶಾ ಬೋಂಸ್ಲೆ ಹಾಡಿದ ಹಾಡನ್ನು ಆರ್ಯನ್ ಎಂ ಪ್ರತಾಪ್ ಮತ್ತು ರಾಘವೇಂದ್ರ ಕಾಮತ್ ಸೇರಿ ಬರೆದಿದ್ದಾರೆ. ಆಶಾ ಬೋಂಸ್ಲೆ ಜತೆ ಚೇತನ್ ನಾಯಕ್ ಧ್ವನಿಗೂಡಿಸಿದ್ದಾರೆ. ಬಾಂಬೆಯ ಯಶ್ ರಾಜ್ ಸ್ಟುಡಿಯೋದಲ್ಲಿ ಧ್ವನಿಮುದ್ರಣಗೊಂಡಿದ್ದು ಇಲ್ಲಿ ಧ್ವನಿ ಮುದ್ರಣಗೊಂಡ ಪ್ರಥಮ ಕನ್ನಡ ಚಿತ್ರ ಎಂಬ ಖ್ಯಾತಿಗೂ ಪಾತ್ರವಾಗಿದೆ.
19/11 ಚಿತ್ರಕ್ಕೆ ಕಥೆ, ಚಿತ್ರಕತೆ ಮತ್ತು ನಿರ್ದೇಶನ ಆರ್ಯನ್ ಎಂ. ಪ್ರತಾಪ್ ಅವರದ್ದು. ಸುಬ್ರಹ್ಮಣ್ಯ ಛಾಯಾಗ್ರಹಣ, ಆಂಟೋನಿ ಸಂಕಲನ, ಜೋಯೆಲ್ ಮತ್ತು ಅಭಿಲಾಷ್ ಸಂಗೀತವಿರುವ ಈ ಚಿತ್ರದಲ್ಲಿ ಪಲ್ಲವಿ ನಾಯಕ್ ಮತ್ತು ರಕ್ಷಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕೊರೊನಾ ಸಂದರ್ಭದಲಲಿ ಕೋವಿಶೀಲ್ಡ್ ಪಡೆದವರು ತಂಪುಪಾನಿಯ,ಐಸ್ ಕ್ರೀಮ್ ಸೇವಿಸಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ
ಜಿಲ್ಲೆಯಲ್ಲಿ ಬಿಸಿಲು ಆವರಿಸಿಕೊಂಡಿದ್ದು, ಬಿಸಿಲಿನ ಸಾಖಕ್ಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಮೃತಪಟ್ಟಿದ್ದಾರೆ. ಹಾಗೂ ಶಕ್ತಿನಗರದಲ್ಲಿ ಕಾರಿಗೆ ಬೆಂಕಿ…
ಜನ ಸಮುದಾಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಅಗ್ನಿ ಶಾಮಕದಳದ ವೀರರನ್ನು ಗೌರವಿಸಲು ಇಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಅಗ್ನಿಶಾಮಕ ದಿನವನ್ನು…
ಮಂಗಳೂರಿನ ಹೊರ ವಲಯ ವಳಚ್ಚಿಲ್ನ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಜಗಳವಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜ್ ಫೆಸ್ಟ್…
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ತೆಲಂಗಾಣದಲ್ಲಿ ಕೇಸ್ ದಾಖಲಾಗಿದೆ. ಮುಖ್ಯ ಚುನಾವಣಾಧಿಕಾರಿ…
ನಗರದಲ್ಲಿ ಸಚಿವ ಈಶ್ವರ ಖಂಡ್ರೆ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಖಾ ವಿರುದ್ದ ಬ್ಯಾಟಿಂಗ್ ಮಾಡಿದ್ದಾರೆ.