ಮುಂಬೈ ; ಎಲ್ಲೆಡೆ ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಅವರ ಪತ್ನಿ ಕಿರಣ್ ರಾವ್ ಅವರ ವಿಚ್ಚೇದನದ ವಿಷಯವು ದೊಡ್ಡ ಸದ್ದನ್ನು ಮಾಡಿದ್ದು, ಈ ಕುರಿತಾಗಿ ವೈವಿದ್ಯಮಯ ಚರ್ಚೆಗಳು ಕೂಡಾ ನಡೆಯುತ್ತಿವೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಅಮೀರ್ ಖಾನ್ ಅವರ ಮಗಳು ಆಯ್ರಾ ಖಾನ್ ಸುದ್ದಿಯಾಗಿದ್ದಾರೆ. ಆಯ್ರಾ ಖಾನ್ ತನ್ನನ್ನು ತಾನು ಆದಷ್ಟು ಮೀಡಿಯಾಗಳ ಸುದ್ದಿಗಳಿಂದ ದೂರ ಇಟ್ಟುಕೊಂಡಿದ್ದಾರೆ. ಅವರು ಜೀವನವನ್ನು ಆದಷ್ಟು ಖಾಸಗಿಯಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಹೆಚ್ಚಾಗಿ ಆಯ್ರಾ ಸುದ್ದಿಗಳಲ್ಲಿ ಸುಳಿದಾಡುವುದಿಲ್ಲ. ಇದೀಗ ಆಯ್ರಾ ಖಾನ್ ತಮ್ಮ ಬಾಯ್ ಫ್ರೆಂಡ್ ನೂಪುರ್ ಶಿಖ್ರೆ ಜೊತೆ ಕೈ ಕೈ ಹಿಡಿದುಕೊಂಡು ಓಡಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಅಲ್ಲದೇ ಫ್ಯಾನ್ ಪೇಜ್ ಗಳಲ್ಲಿ ಸಹಾ ಈ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ.
ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರ ವಿಚ್ಚೇದನದ ಘೋಷಣೆಯಾದ ಬೆನ್ನಲ್ಲೇ ಆಯ್ರಾ ಖಾನ್ ತಮ್ಮ ಬಾಯ್ ಫ್ರೆಂಡ್ ನೂಪುರ್ ಶಿಖ್ರೆ ಜೊತೆ ಕೈ ಕೈ ಹಿಡಿದು ಸುತ್ತಾಡುತ್ತಾ ಮುಂಬೈನ ಬಾಂದ್ರಾದ ಪ್ರದೇಶದಲ್ಲಿ ಮಾದ್ಯಮಗಳ ಕ್ಯಾಮರಾ ಕಣ್ಣುಗಳಿಗೆ ಸೆರೆಯಾಗಿದ್ದಾರೆ. ಆಯ್ರಾ ತಮ್ಮ ಬಾಯ್ ಫ್ರೆಂಡ್ ಜೊತೆಗಿನ ಫೋಟೋಗಳು ಹಾಗೂ ವೀಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ಶೇರ್ ಮಾಡುತ್ತಲೇ ಇರುತ್ತಾರೆ. ಆಯ್ರಾ ನೂಪುರ್ ಶಿಖ್ರೆ ಜೊತೆ ಕಳೆದ ಕೆಲವು ಸಮಯದಿಂದಲೂ ಸಹಾ ಡೇಟ್ ಮಾಡುತ್ತಿದ್ದು, ಈ ವಿಷಯ ಈಗಾಗಲೇ ಬಹುತೇಕ ಎಲ್ಲರಿಗೂ ತಿಳಿದಿರುವುದೇ ಆಗಿದೆ.
ಇನ್ನು ಆಯ್ರಾ ಧರಿಸಿದ್ದ ಔಟ್ ಫಿಟ್ ವಿಷಯಕ್ಕೆ ಬಂದರೆ ಆಕೆ ಬ್ಲೂ ಸ್ಕರ್ಟ್, ಬಿಳಿ ಬಣ್ಣದ ಕ್ರಾಪ್ ಟಾಪ್ ಮತ್ತು ಬ್ಲಾಕ್ ಶ್ರಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಅದೇ ವೇಳೆ ಅವರ ಬಾಯ್ ಫ್ರೆಂಡ್ ನೂಪುರ್ ಶಿಖ್ರೆ ಕ್ಯಾಷುಯಲ್ ವಸ್ತ್ರಗಳನ್ನು ಧರಿಸಿ ಕೂಲ್ ಆಗಿ ಕಾಣಿಸಿಕೊಂಡಿದ್ದಾರೆ. ಆಯ್ರಾ ಕೈಯಲ್ಲಿ ಶಾಪಿಂಗ್ ಬ್ಯಾಗ್ ಗಳು ಇರುವುದನ್ನು ನೋಡಬಹುದು. ಕೆಲವೇ ದಿನಗಳ ಹಿಂದೆ ಆಯ್ರಾ ಕೆಲವು ರೋಮ್ಯಾಂಟಿಕ್ ಫೋಟೋ ಹಾಗೂ ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಅವರು ನೂಪುರ್ ಜೊತೆ ಪೋಸ್ ಗಳನ್ನು ಕೊಡುತ್ತಿರುವುದನ್ನು ನೋಡಬಹುದಾಗಿದೆ. ವೀಡಿಯೋ ಶೇರ್ ಮಾಡಿರುವ ಆಯ್ರಾ ತಮ್ಮ ಕ್ಯಾಪ್ಷನ್ ನಲ್ಲಿ ನೀನು ನನ್ನ ಆ್ಯಂಕರ್ ಎಂದು ಬರೆದುಕೊಂಡಿದ್ದಾರೆ. ಆಯ್ರಾ ಈ ವರ್ಷ ಪ್ರಾಮಿಸ್ ಡೇ ದಿನ ತನ್ನ ಮತ್ತು ನೂಪುರ್ ಶಿಖ್ರೆ ನಡುವಿನ ಸಂಬಂಧದ ಕುರಿತಾಗಿ ಸ್ಪಷ್ಟನೆಯನ್ನು ನೀಡಿದ್ದರು. ಆಗ ಆಯ್ರಾ ತಮ್ಮ ಪೋಸ್ಟ್ ನಲ್ಲಿ ಆಗ, ನಿನ್ನ ಜೊತೆಯಲ್ಲಿ ಹಾಗೂ ನಿನಗಾಗಿ ಪ್ರಮಾಣವನ್ನು ಮಾಡುವುದು ಗೌರವದ ವಿಷಯವಾಗಿದೆ. ಅದಾದ ನಂತರ ಆಯ್ರಾ ಒಂದಾದ ನಂತರ ಮತ್ತೊಂದು ಫೋಟೋ ಹಾಗೂ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುವುದನ್ನು ಆರಂಭಿಸಿದ್ದರು.
ಐರಾ ಇತ್ತೀಚೆಗೆ ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಫೌಂಡೇಶನ್ ಒಂದನ್ನು ಪ್ರಾರಂಭಿಸಿದ್ದಾರೆ. ಐರಾ ಅವರ ಎನ್ ಜಿ ಓ ಅಗತ್ಸು ಫೌಂಡೇಶನ್ ಎಂದು ಹೆಸರಿಸಲಾಗಿದೆ. ಈ ಎನ್ ಜಿ ಓ ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಸುಧಾರಿಸುವತ್ತ ಗಮನ ಹರಿಸುತ್ತದೆ. ಒಟ್ಟಾರೆ ಸದ್ಯಕ್ಕಂತೂ ಆಯ್ರಾ ಮತ್ತು ನೂಪುರ್ ಅವರ ಶಾಪಿಂಗ್ ಫೋಟೋ ಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ತಂದೆ ತಾಯಿಯ ವಿಚ್ಚೇದನದ ನಂತರ ಅವರ ಶಾಪಿಂಗ್ ಫೋಟೋ ಟೀಕೆಗಳಿಗೂ ಸಹಾ ಗುರಿಯಾಗಿದೆ.
ಮೇ.15 ರಿಂದ ಆರಂಭವಾಗಿದ್ದ ಎಸ್ಎಸ್ಎಲ್ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು ರಾಜ್ಯ…
ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್ನಲ್ಲಿ ಮನೆಗೆ ಹೋಗುವಾಗ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…
ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…
ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…