ಕಾಸರಗೋಡು : ಕೊಲೆ ಯತ್ನ ಹಾಗೂ ಇನ್ನಿತರ ಪ್ರಕರಣಗಲ್ಲಿ ಶಾಮೀಲಾಗಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿ ತಲೆಮರೆಸಿಕೊಂಡ ಆರೋಪಿಯೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉಪ್ಪಳ ಕೈಕಂಬದ ಆದಂ ( ೪೦) ಬಂಧಿತ ಆರೋಪಿ . ೨೦೧೮ ರಲ್ಲಿ ಉಪ್ಪಳದಲ್ಲಿ ಮುಸ್ತಫಾ ಎಂಬವರನ್ನು ಇರಿದು ಕೊಲೆಗೆತ್ನಿಸಿದ ಪ್ರಕರಣದ ಆರೋಪಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ೨೦೨೦ ರಲ್ಲಿ ಬಂಧಿಸಲಾಗಿತ್ತು.
ಕೋವಿಡ್ ಸಂದರ್ಭದಲ್ಲಿ ಕೋವಿಡ್ ನಿಗಾ ಘಟಕಕ್ಕೆ ಈತನನ್ನು ದಾಖಲಿಸಲಾಗಿತ್ತು . ಈ ಸಂದರ್ಭದಲ್ಲಿ ಪೊಲೀಸರನ್ನು ತಪ್ಪಿಸಿ ತಪ್ಪಿಸಿ ತಲೆಮರೆಸಿಕೊಂಡಿದ್ದನು. ಕರ್ನಾಟಕ, ಆಂಧ್ರಪ್ರದೇಶ ಮೊದಲಾದೆಡಗಳಲ್ಲಿ ತಲೆಮರೆಸಿಕೊಂಡಿದ್ದನು. ಕೊಲೆಯತ್ನ, ಮಾದಕ ವಸ್ತು ಮಾರಾಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದನು.