Bengaluru 22°C

ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಮಗನ ಎದುರೇ ಪೆಟ್ರೋಲ್ ಹಾಕಿ ಸುಟ್ಟ ಕೀಚಕ ಗಂಡ!

ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಮಗನ ಎದುರೇ ಪೆಟ್ರೋಲ್ ಹಾಕಿ ಕೀಚಕ ಗಂಡ ಸುಟ್ಟ ಹಾಕಿದ್ದಾನೆ. ತಂದೆಯ ಕರಾಳತೆಯನ್ನ ಪುತ್ರ ಬಿಚ್ಚಿಟ್ಟ ಘಟನೆ ಮೈಸೂರು ಜಿಲ್ಲೆ ಎಚ್.ಡಿ ಕೋಟೆಯ ಹನುಮಂತ ನಗರದಲ್ಲಿ ನಡೆದಿದೆ.

ಮೈಸೂರು: ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಮಗನ ಎದುರೇ ಪೆಟ್ರೋಲ್ ಹಾಕಿ ಕೀಚಕ ಗಂಡ ಸುಟ್ಟ ಹಾಕಿದ್ದಾನೆ. ತಂದೆಯ ಕರಾಳತೆಯನ್ನ ಪುತ್ರ ಬಿಚ್ಚಿಟ್ಟ ಘಟನೆ ಮೈಸೂರು ಜಿಲ್ಲೆ ಎಚ್.ಡಿ ಕೋಟೆಯ ಹನುಮಂತ ನಗರದಲ್ಲಿ ನಡೆದಿದೆ.


ಮಧುರ ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವಿನ ಹೋರಾಟ ನಡೆಸುತ್ತಿದ್ದಾರೆ. ಪತ್ನಿ ಮಧುರಳನ್ನ ಪೆಟ್ರೋಲ್ ನಿಂದ ಸುಟ್ಟ ಕೀಚಕ ಗಂಡ ಮಲ್ಲೇಶ್‌ ನಾಯ್ಕ್. ಈತ ಮೂಲತಃ ವಿಜಯನಗರ ಜಿಲ್ಲೆ ಕೂಡ್ಲಗಿ ತಾಲೂಕಿನ ಬಿಬಿ ತಾಂಡದವರು. ಕಳೆದ 8 ವರ್ಷಗಳ ಹಿಂದೆ ಅದೇ ಗ್ರಾಮದ ಮಧುರಳನ್ನ ಮಲ್ಲೇಶ್ ನಾಯ್ಕ್ ವಿವಾಹವಾಗಿದ್ದರು.


ಸದ್ಯ ಮಲ್ಲೇಶ್ ನಾಯ್ಕ್ ಮೈಸೂರು ಜಿಲ್ಲೆ ಎಚ್.ಡಿ ಕೋಟೆಯ ಕೆಎಸ್ಆರ್ ಟಿಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಆರೇಳು ವರ್ಷದಿಂದ ಪತ್ನಿಗೆ ವರದಕ್ಷಣೆ ಕಿರುಕುಳ ಹಾಗೂ ಪತ್ನಿಯ ಬಗೆ ಅನುಮಾನದಿಂದ ಮಲ್ಲೇಶ್ ನೋಡುತ್ತಿದ್ದನು.


ಪ್ರತಿ ದಿನ ಕುಡಿದು ಬಂದು ಸೈಟ್ ಕೊಡಿಸುವಂತೆ ಮಲ್ಲೇಶ್ ಗಲಾಟೆ ಮಾಡುತ್ತಿದ್ದನು. ಈ ನಡುವೆ ಕೆಲ ದಿನಗಳ ಹಿಂದೆ ಒಂದೆರೆಡು ದಿನಗಳ ಮಟ್ಟಿಗೆ ತವರು ಮನೆಗೆ ಹೋಗಿದ್ದ ಮಧುರ. ಈ ವಿಚಾರವನ್ನೇ ಇಟ್ಟುಕೊಂಡು ಪತ್ನಿಗೆ ಪೆಟ್ರೋಲ್ ಹಾಕಿ ಮಲ್ಲೇಶ್ ನಾಯ್ಕ್ ಸುಟ್ಟ ಹಾಕಿದ್ದಾನೆ.


ಮಲ್ಲೇಶ್ ನಾಯ್ಕ್ ಹಾಗೂ ಮಲ್ಲೇಶ್ ತಾಯಿ ಗೌರಿ ಯಿಂದ ಪ್ರತಿನಿತ್ಯ ಮಧುರಗೆ ಕಿರುಕುಳ ಎಂದು ಕುಟುಂಬಸ್ಥರಿಂದ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಎಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Nk Channel Final 21 09 2023