ಸಾಣೂರು: ಪ್ರಕೃತಿ ಸಮೂಹ ಸಂಸ್ಥೆಯಲ್ಲಿ ಪೋಷಕ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಕ್ರಿಸ್ಪಿನ್ ಜೆರಾಲ್ಡ್ ಕ್ರಾಸ್ಟ್ ರವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
2022 -23 ಶೈಕ್ಷಣಿಕ ವರ್ಷದ ಪೋಷಕ ಸಂಘಕ್ಕೆ ಆಯ್ಕೆಯಾದ ಸಂಘದ ಸದಸ್ಯರಾದ ದೇವಾನಂದ ಶೆಟ್ಟಿ ಸಾಣೂರು,ದಿನೇಶ್ ತಾಕೊಡೆ, ಶಾಲಮಿಲಿ ಸಾಣೂರು, ವನಿತಾ ಮುರತ್ತಂಗಡಿ, ಪ್ರಮೀಳಾ ಮುರತ್ತಂಗಡಿ , ಮೊಂತಿ ಡಿ ಸೋಜಾ ಸಾಣೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಚಾರ್ಲ್ಸ್ ಕ್ರಾಸ್ತಾ ರವರು ಶುಭ ಹಾರೈಸುವದರೊಂದಿಗೆ, ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆಯಾದ ಕುಮಾರಿ ವಿನ್ಯಾರವರು ಹಾಗೂ ಪ್ರಕೃತಿ ನ್ಯಾಷನಲ್ ಸ್ಕೂಲಿನ ಪ್ರಾಂಶುಪಾಲರಾದ ಶ್ರೀಪ್ರಸಾದ ರವರು 2022 -23 ರ ಶೈಕ್ಷಣಿಕ ವರ್ಷದ ಕೇಂದ್ರಿಯ ಶಾಲೆಯಲ್ಲಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು..
ಸಂಸ್ಥೆಯ ಆಡಳಿತಾಧಿಕಾರಿಯಾದ ಕುಮಾರಿ ಮಮತ ಶರ್ಮ ರವರು ಸಂಸ್ಥೆಯ ಅಭಿವೃದ್ಧಿಯ ಕುರಿತಂತೆ ಮಾತಾಡಿದರು,ಸಂಸ್ಥೆಯ ಆಡಳಿತ ನಿರ್ದೇಶಕರಾದ ಅಶೋಕ ಕುಮಾರ್ ರವರು ಶಾಲೆಯ ನಿಯಮಾವಳಿಗಳನ್ನು ಮತ್ತು ಮುಂದಿನ ಅಭಿವೃದ್ಧಿಯ ಯೋಜನೆಯ ಕುರಿತು ಸಂವಾದಿಸುವುದರೊಂದಿಗೆ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾರಿಗೂ ವಂದಿಸಿದರು.