ಬಸವಕಲ್ಯಾಣ: ನೀಲಾಂಬಿಕಾ ಕಾಲೇಜಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲು 50 ಲಕ್ಷ ಅನುದಾನ ಒದಗಿಸಲಾಗುವುದು’ ಎಂದು ಶಾಸಕ ಶರಣು ಸಲಗರ ಭರವಸೆ ನೀಡಿದರು.
ನಗರದ ನೀಲಾಂಬಿಕಾ ಸರ್ಕಾರಿ ಕಾಲೇಜಿನಲ್ಲಿ ಶನಿವಾರ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿ, ‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ 50 ಕೋಟಿ ಅನುದಾನವಿದ್ದು, 15 ದಿನದಲ್ಲಿ ಮಂಜೂರುಗೊಳಿಸಲಾಗುವುದು. ಈಗಾಗಲೇ ಕಾಲೇಜಿನ ಗ್ರಂಥಾಲಯಕ್ಕಾಗಿ 3.75 ಲಕ್ಷ ಅನುದಾನ ನೀಡಿದ್ದೇನೆ’ ಎಂದು ಹೇಳಿದರು.
‘ಬರೆಯುವುದಕ್ಕೆ ಐವತ್ತು ಪೈಸೆಯ ಪೆನ್ನಿನ ನಳಿ ಸಿಗದಂಥ ಕಾಲವಿತ್ತು. ಈಗ ತಂದೆ-ತಾಯಿ ಮಕ್ಕಳಿಗೆ ಸಾವಿರಾರು ರೂಪಾಯಿಯ ಸ್ಮಾರ್ಟ್ಫೋನ್ ಕೊಡುತ್ತಿದ್ದಾರೆ. ಆದ್ದರಿಂದ ಶ್ರಮವಹಿಸಿ ಓದಿ, ಉತ್ತಮ ಫಲಿತಾಂಶ ತರಬೇಕು. ಐಎಎಸ್ ಅಧಿಕಾರಿ ಆಗಬೇಕು’ ಎಂದರು.
ಪ್ರಾಚಾರ್ಯ ಸುರೇಶ ಅಕ್ಕಣ್ಣ, ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೇಗಾಂವ, ಅಶೋಕರೆಡ್ಡಿ, ಸವಿತಾ ಶಿವಾನಂದ, ಮಹಾಲೇಶ ಮಾತನಾಡಿದರು. ದೀಪಕ ಗಾಯಕವಾಡ, ಜ್ಞಾನೇಶ್ವರ ಮುಳೆ, ಉಪನ್ಯಾಸಕತಾದ ಸುರೇಶ ಮೋರೆ, ನಜೀಮುದ್ದೀನ್, ವಿಷ್ಣು ಜಮಾದಾರ, ಲತಾ ಕಟಕೆ, ರಾಜಕುಮಾರ ಕಳಮಾಸೆ, ಶಿವಕುಮಾರ ಜಡಗೆ, ಮಾಣಿಕರೆಡ್ಡಿ, ಅಶ್ವಿನಕುಮಾರ ಗೋರ್ಟೆ, ಬಸವರಾಜ ಇದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.