ಕಳಸ: ತಾಲ್ಲೂಕಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯುತ್ತಿರುವ ೨೦೨೩ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ಸುಮಾರು ೩೮೨ ವಿದ್ಯಾರ್ಥಿಗಳಿಗೆ ಶುಕ್ರವಾರ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಗುಲಾಬಿ ಹೂ ನೀಡಿ ಸ್ವಾಗತಿಸುವ ಮೂಲಕ ಪರೀಕ್ಷೆಯಲ್ಲಿ ಯಶಸ್ಸುಗೊಳಿಸಲು ಶುಭ ಕೋರಿದರು.
ಇದೇ ವೇಳೆ ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸಪೆಕ್ಟರ್ ಡಾ. ಸಿ.ಆರ್.ಮೋಹನ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳಿಗೆ ನೈತಿಕ ಸ್ಟೈರ್ಯ ತುಂಬಿ ಪರೀಕ್ಷೆಯನ್ನು ಅತ್ಯುತ್ತಮ ರೀತಿಯಲ್ಲಿ ಬರೆಯುವ ಆತ್ಮವಿಶ್ವಾಸ ನಿಮಗೆಲ್ಲರಿಗೂ ದೇವರು ಕರುಣಿಸಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ಗಜೇಂದ್ರ, ಚಂದ್ರಶೇಖರ, ಶಿವಕುಮಾರ್, ಉಮೇಶ್, ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರಸ್ವಾಮಿ, ಸಂಸೆ ಮುಖ್ಯ ಶಿಕ್ಷಕ ಲೋಕೇಶ್, ಹೊರನಾಡು ಶಾಲೆ ಮುಖ್ಯ ಶಿಕ್ಷಕ ಗೋವಿಂದಪ್ಪ, ಶಿಕ್ಷಕರುಗಳಾದ ಸಂದೇಶ್ ಆಚಾರ್ಯ, ಮಂಜುನಾಥ್, ಆನಂದ ಗುರೂಜಿ, ರವಿಕುಮಾರ್, ಆನಂದ, ಶೃಂಗೇಶ್, ಉದಯ್, ಮಹಮದ್ ಸಾದಿಕ್, ಶ್ರೀಮತಿ ಹೇಲನ್, ದಿವ್ಯ ಕರ್ದೋಜಾ, ಶ್ರೀಮತಿ ಮೇನಕಾ ಮಲ್ಲಿಕಾರ್ಜುನ ಮತ್ತಿತರರು ಹಾಜರಿದ್ದರು.