News Karnataka Kannada
Wednesday, May 01 2024
ಕ್ಯಾಂಪಸ್

ಸಾವಿತ್ರಿಬಾಯಿ ಫುಲೆ ಜನ್ಮ ದಿನದ ಪ್ರಯುಕ್ತ ತುಮಕೂರು ವಿ.ವಿಯಲ್ಲಿ ಉಪನ್ಯಾಸ ಕಾರ್ಯಕ್ರಮ

Savithri Bayipule
Photo Credit :

ತುಮಕೂರು : ಜ್ಞಾನದ ಆಲದ ಮರ, ಅಕ್ಷರದ ಅವ್ವ, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಬದುಕನ್ನೇ ಮೀಸಲಿಟ್ಟು, ಸಂಕಷ್ಟಗಳನ್ನು ಎದುರಿಸುತ್ತ ಶೈಕ್ಷಣಿಕ ಸಂಘಟನೆಗೆ ಮುಂದಾದವರು ಸಾವಿತ್ರಿ ಬಾಯಿ ಫುಲೆ ಎಂದು ಜನಮುಖಿ ಸಾಹಿತ್ಯ ಸಂಘಟನೆರಾಜ್ಯ ಸಂಚಾಲಕಿ ಡಾ.ಬಿ.ಸಿ.ಶೈಲಾ ನಾಗರಾಜ್‌ ಅಭಿಪ್ರಾಯಪಟ್ಟಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಸೋಮವಾರ ಸಾವಿತ್ರಿಬಾಯಿ ಫುಲೆ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿ ಬಾಯಿ ಫುಲೆಕೊಡುಗೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.  ಕಂದಾಚಾರ, ಅಸ್ಪೃಶ್ಯತೆ, ಅಸಮಾನತೆ, ವೈದಿಕ ಆಚರಣೆಗಳಲ್ಲಿ ಹಿಂದೆ ಸ್ವಾತಂತ್ರ್ಯ ಇರಲಿಲ್ಲ. ಅಂತಹ ಅವೈಚಾರಿ ಕತೆಯನ್ನು ಪ್ರಶ್ನಿಸಲು ಈ ಕಾಲದಲ್ಲಿಒಬ್ಬ ಸಾವಿತ್ರಿ ಬರಬೇಕು.ಶಿಕ್ಷಣ ಒಂದುತಮ್ಮ ಬಾಳಿಗೆ ಬೆಳಕು ನೀಡುವಂತಹದ್ದು.ಜ್ಯೋತಿ ಬಾ ಫುಲೆಅವರುತನ್ನ ಹೆಂಡತಿಗೆಗುರುವಾಗಿ ಶಿಕ್ಷಣ ನೀಡಿದರುಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಲ್ (ಪ್ರೊ.) ವೈ ಎಸ್ ಸಿದ್ದೇಗೌಡ ಅವರು ಶಿಕ್ಷಣ ವಿಲ್ಲದೆ ಸಾಕ್ಷಾತ್ಕಾರ ಇಲ್ಲ. ಅಂಧಕಾರದಲ್ಲಿ ಹುಟ್ಟಿ ಜ್ಞಾನದ ದೀಕ್ಷೆಯನ್ನು ಪಡೆದವರು, ಅಂದು ಇದ್ದಂತಹ ಸಮಸ್ಯೆಗಳ ನಡುವೆ ಚಿಮ್ಮಿದ ಚೇತನ ಸಾವಿತ್ರಿ ಬಾಯಿ ಫುಲೆ ಎಂದರು.
ವಿದ್ಯಾರ್ಥಿಗಳು ವಿದ್ಯೆಯನ್ನುಕಲಿಯಲು ಆಸಕ್ತಿ ತೋರದಿದ್ದರೆ ಜ್ಞಾನದ ಲೋಕವನ್ನು ಕಾಣಲು ಸಾಧ್ಯವಿಲ್ಲ. ಸ್ಪರ್ಧಾತ್ಮಕ ಜೀವನದಲ್ಲಿ ಮೌಲ್ಯಗಳನ್ನು ಅರಿತು ನಮ್ಮ ವ್ಯಕ್ತಿತ್ವದಿಂದ ಬೇರೆಯವರನ್ನು ಪ್ರೇರಣೆಗೆ ಒಳಪಡಿಸುವ ದಿಕ್ಕಿನಲ್ಲಿ ನಾವು ಸಾಗಬೇಕು ಎಂದರು.

ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಅವರು ‘ಸಾವಿತ್ರಿ ಬಾಯಿ ಪುಲೆ ಆಧುನಿಕ ಶಿಕ್ಷಣದ ತಾಯಿ, ಪ್ರಥಮ ಶಿಕ್ಷಕಿ, ಮನೆಯೇ ಮೊದಲ ಶಾಲೆ ಜ್ಯೋತಿ ಬಾ ಫುಲೆಅವರೇ ಮೊದಲಗುರು’ ಎಂದರು. ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ.ಜ್ಯೋತಿ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಶಾಲಿನಿ ಬಿ. ಆರ್. ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು