ಬಂಟ್ವಾಳ: ಕಾರ್ಮೆಲ್ ಕಾಲೇಜಿನ ವುಮೆನ್ ಸೆಲ್ ಮತ್ತು ಚೈರ್ ಕ್ರೀಶ್ಚಾನಿಟಿ ಮಂಗಳೂರು ವಿಶ್ವ ವಿದ್ಯಾನಿಲಯ ಹಾಗೂ ಲಯನ್ಸ್ ಕ್ಲಬ್ಬಂಟ್ವಾಳ ಇದರ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ವಿಜೇತೆ, ದೇಶ ವಿದೇಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಅರಿವು ಮೂಡಿಸಿದ ಡಾ ಅಕ್ಕಯ್ ಪದ್ಮಶಾಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಡಾ ಅಕ್ಕಯ್ ಪದ್ಮಶಾಲಿಯವರ ನಿಜ ಜೀವನವನ್ನು ಆಧರಿಸಿದ ನಾಟಕ “ ಅಕ್ಕಯ್ -ಬದಲಾವಣೆಗಾಗಿ ಮಹಿಳೆ” ಯನ್ನು ಪ್ರದರ್ಶಿಸಲಾಯಿತು.
೭೦ ನಿಮಿಷಗಳ ಏಕವ್ಯಕ್ತಿ ನಾಟಕವನ್ನು ನಯನಾ ಸೋಡಾ ಅಭಿನಯಿಸಿದರು ಮತ್ತು ಬೇಳೂರು ರಘುನಂದನ್ ನಿರ್ದೇಶಿಸಿದ್ದಾರೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಕ್ಕಯ್ ಈ ನಾಟಕವು ಕೇವಲ ನನ್ನಬಗ್ಗೆ ಮಾತ್ರವಲ್ಲ ಇಂತಹ ಸನ್ನಿವೇಶವನ್ನು ಎದುರಿಸುವ ಎಲ್ಲಾ ಲೈಂಗಿಕ ಅಲ್ಪಸಂಖ್ಯಾತರ ಜೀವನವನ್ನು ಪ್ರತಿನಿದಿಸುತ್ತದೆ.
ಲೈಂಗಿಕ ಅಲ್ಪಸಂಖ್ಯಾತರು ಕೂಡ ಇತರ ಲಿಂಗಗಳಂತಯೇ ಗೌರವ ಮತ್ತು ಘನತೆಗೆ ಅರ್ಹರು ಎಂದರು. ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಶ್ರೀಮತಿ ಶೋಭಾ ಪೈ, ಶ್ರೀಮತಿ ಮೀನಾಕ್ಷಿ ಆಚಾರ್ಯ ಮತ್ತು ಶ್ರೀಮತಿ ಮಧುರಾ ಇವರಿಗೆ ಸನ್ಮಾನಿಸಲಾಯಿತು.ಕಾಲೇಜಿನ ಪ್ರಾಂಶುಪಾಲೆ ಭಗಿನಿ ಡಾ ಲತಾ ಎ.ಸಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಬಂಟ್ವಾಳ್ ಅದ್ಯಕ್ಷರಾದ ಧೀರಜ್, ಡಾ ಫಾ ಐವಾನ್ ಡಿ ಸೋಜ ಚೈರ್ ಕ್ರಿಶ್ಚಾನಿಟಿ ಮಂಗಳೂರು ವಿಶ್ವ ವಿದ್ಯಾನಿಲಯ,
ಕಾರ್ಮೆಲ್ ಕಾಲೇಜಿನ ಜಂಟಿ ಕಾರ್ಯ ದರ್ಶಿ ಭಗಿನಿ ಮರಿಯ ಪ್ರಿಯ ಎ.ಸಿ,ಕಾರ್ಮೆಲ್ ಪಿ .ಯು ಕಾಲೇಜಿನ ಪ್ರಾಂಶುಪಾಲೆ ಭಗಿನಿ ನವೀನ ಎ.ಸಿ,
ಲಯನ್ಸ್ ಕ್ಲಬ್ ನ ಸದಸ್ಯರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಸುಪ್ರೀತ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ತೇಜಸ್ವಿ ವಂದಿಸಿದರು.